ನಾನು ನನ್ನ ಚಿಕ್ಕಂದಿನ ದಿನಗಳಲ್ಲಿ ಕಂಡ ಸರಳ, ಸಜ್ಜನಿಕೆಯ ಜೊತೆ ಪರರ ಕಷ್ಟಕ್ಕೆ ಮರುಗುವ ಮಾನವೀಯತೆಯ ಪ್ರತಿ ರೂಪದಂತಿದ್ದ ಶ್ರೀಕಂಠಯ್ಯ.
ಆ ಪಾತ್ರಕ್ಕೆ ಅಕ್ಷರ ರೂಪ ಕೊಡಬೇಕೆಂದು ಎಷ್ಟೋ ವರ್ಷಗಳಿಂದ ಹಂಬಲಿಸುತ್ತಿದ್ದೆ. ಆದರೆ ಅದಕ್ಕೆ ಸರಿಯಾದ ವೇದಿಕೆ ಸಿಕ್ಕಿರಲಿಲ್ಲ.
ಆದರೆ ಶೃಂಗೇರಿಯ ಕಡೆ ಪ್ರವಾಸಕ್ಕೆ ಹೋದಾಗ ಮಾರ್ಗ ಮಧ್ಯದಲ್ಲಿ ನಾನೊಂದು ಹುಡುಗಿಯನ್ನ ಕಂಡೆ. ಆ ಹುಡುಗಿಯೇ 'ಬನದ ಮಲ್ಲಿಗೆ'ಯಲ್ಲಿ ರೂಪ ತಳೆದದ್ದು. ಅಲ್ಲಿಯೇ ನಾನು ಚಿಕ್ಕಂದಿನ ದಿನಗಳಲ್ಲಿ ಕಂಡಿದ್ದ ಶ್ರೀಕಂಠಯ್ಯ ಒಂದು ಪಾತ್ರವಾಗಿದ್ದು.
ಈಗ 'ಹಿಮಬಿಂದು' ಅತ್ಯಂತ ಆಕರ್ಷಕವಾಗಿ ನಿಮ್ಮ ಕೈ ಸೇರುತ್ತಿದ್ದಾಳೆ