ನಂಟು ಈ ಜನ್ಮದ್ದು ಅಲ್ಲವೆಂದು ಕಣ್ಮಣಿಗೆ ಗೊತ್ತು. ಅದಕ್ಕೆ ದಾಖಲೆಗಳನ್ನ ಒದಗಿಸಲು ಅವಳಿಂದ ಸಾಧ್ಯವಿಲ್ಲ. ಜಗತ್ತು ವಿಸ್ಮಯಗಳ ಭಂಡಾರ, ಕೆಲವೊಮ್ಮೆ ಎಲ್ಲದಕ್ಕೂ ವೈಜ್ಞಾನಿಕ ಆಧಾರಗಳು ಸಿಗುವುದು ಕಷ್ಟ. ಆದರೆ ಅದು ಅನುಭವಕ್ಕೆ ಸಿಕ್ಕಾಗಲೇ.... ಸತ್ಯದ ಅರಿವು.
ಹೊರಟವಳ ಸನಿಹಕ್ಕೆ ಬಂದು ನಿಂತ ಚೈತನ್ಯ, ಅವಳ ಎದೆಯ ಮೇಲೆ ತೂಗಿಬಿದ್ದ ಮಾಂಗಲ್ಯದತ್ತ ಕಣ್ಣಲ್ಲಿಯೆ ತೋರಿಸಿ ಇದೊಂದು ಸಾಕು, ಎಲ್ಲಾ ನಿನ್ನದಾಗಲು ಪರ್ಮೀಾಷನ್ ಪತ್ರಕ್ಕೆ ಬಿದ್ದ ಮುದ್ರೆ ಎಂದವನ ಉಸಿರು ಅವಳ ಕೆನ್ನೆಗೆ ರಾಚಿತು.
ಜನ್ಮಾಂತರ ಸಂಬಂಧ ಮುಂದುವರಿದಿತ್ತು.