ತಮ್ಮ ಪ್ರತಿ ಕಾದಂಬರಿಯಲ್ಲೂ ವಿಭಿನ್ನ ವಿಷಯಗಳ ಆಳ ಅಗಲಗಳನ್ನು ವಿಸ್ತರಿಸಿ, ಅದರೊಳಗಿನ ಸತ್ವವನ್ನು ತರ್ಕಬದ್ಧವಾಗಿ ವಿಶ್ಲೇಷಿಸಿ ಓದುಗರ ಮುಂದಿಡುವ ಕಲೆ ಅವರಿಗೆ ಅದ್ಭುತವಾಗಿ ಸಿದ್ಧಿಸಿದೆ. ಅದಕ್ಕೆ ಅವರು ಯಾವಾಗಲೂ ನಂ. ೧. ಅವರೇ ಯಂಡಮೂರಿ ವೀರೇಂದ್ರನಾಥ್.
'ಕಪ್ಪುಂಚು ಬಿಳಿಸೀರೆ' ಅವರ ಅಭಿಮಾನಿಗಳು ಮೆಚ್ಚಿಕೊಂಡ ನಂ. ೧ ಕಾದಂಬರಿ ಕೂಡಾ. ಹಲವು ವರ್ಷಗಳ ಹಿಂದೆ ಎರಡು ಪ್ರತಿಷ್ಠಿತ ಟೆಕ್ಸ್ಟೈಲ್ ಕಂಪನಿಗಳ ನಡುವೆ ನಡೆದ ವ್ಯಾಪಾರೀ ಯುದ್ಧವನ್ನು ನೆನಪಿಸುವ ಕಥಾವಸ್ತು ಇದರದ್ದು.
'ಕಪ್ಪುಂಚು ಬಿಳಿಸೀರೆ' ಕನ್ನಡದಲ್ಲಿ ಅನೇಕ ಮುದ್ರಣಗಳನ್ನು ಕಂಡ ಅತ್ಯಂತ ಯಶಸ್ವಿ ಕಾದಂಬರಿ. ಅಂದಿಗೂ ಇಂದಿಗೂ ಎಂದೆಂದಿಗೂ ಈ ಕಾಂದಬರಿಯ ವಸ್ತು ಪ್ರಸ್ತುತ.