'ಆತ್ಮ ವಿಶ್ವಾಸವೇ ಬದುಕಿನ ಶ್ವಾಸ!
ತನ್ನನ್ನು ತಾನು ನಂಬುವವನು ಆಸ್ತಿಕ,
ಅಂತಲ್ಲದವನು ನಾಸ್ತಿಕ'
ಇದು ವೀರವೇದಾಂತಿ ಸ್ವಾಮಿ ವಿವೇಕಾನಂದರ
ಬದುಕಿನ ಸತ್ಯಾನ್ವೇಷಣೆಯ ಅದ್ಭುತವಾದ
ವಿಶ್ಲೇಷಣೆ. 'ಆಸ್ತಿಕತೆ' ಮತ್ತು 'ನಾಸ್ತಿಕತೆ'
ಬಗೆಗಿನ ಸರಳ ಚಿಂತನೆ.
ಭಗವಂತನನ್ನು ನಂಬಬೇಕು. ಅದಕ್ಕಿಂತ
ಹೆಚ್ಚಾಗಿ ನಮ್ಮನ್ನ ನಾವು ನಂಬಬಕು. 'ಎಷ್ಟು
ದೇವರ ನೀನೆಷ್ಟೆ ನಂಬಿದರೇನೊಂದಿಷ್ಟು ನೀ
ನಂಬದಿರೆ ನಿನ್ನ ನೀನು?' ಎಂದಿದ್ದಾರೆ
ರಾಷ್ಟ್ರಕವಿ ಕುವೆಂಪು ತಮ್ಮ 'ಆತ್ಮ ಶ್ರದ್ಧೆ'
ಕವನದಲ್ಲಿ.
ನಂಬಿಕೆ ಜೀವನದಲ್ಲಿ ಬಹು ಮುಖ್ಯವಾದದ್ದು.