ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಬದುಕಿನ ಒಂದೇ ನಾಣ್ಯದ ಎರಡು ಮುಖಗಳು. ತ್ಯಾಗರಾಜರು 'ಸಾಕ್ಷಾತ್ಕಾರ' ನೀ ಸದ್ಭಕ್ತಿ ಸಂಗೀತ ಜ್ಞಾನವಿಹೀನುಲುಕು ಮೋಕ್ಷಮುಗದಾ?' ಎಂದು ಪ್ರಶ್ನಿಸಿದ್ದಾರೆ. ಪದೇ ಪದೇ ಈ ವಿಚಾರ ನನ್ನ ಮನಸ್ಸಿನಲ್ಲಿ ಮೂಡಿದಾಗ ಸಂಗೀತವನ್ನ ಬಳಸಿಕೊಂಡು ಯಾಕೆ ಒಂದು ಕಾದಂಬರಿಯನ್ನು ಬರೆಯಬಾರದು ಎನಿಸಿತು. ಒಂದಿಷ್ಟು ಸಂಗೀತ ಲೋಕ ಹೊಕ್ಕೆ. ಅನರ್ಘ್ಯ ರತ್ನಗಳ ದರ್ಶನ. ಮೋಹನಾ, ಆಹಿರಿ ರೇವತಿ, ಆನಂದ ಭೈರವಿ, ಶಂಕರಾಭರಣ, ಕಾವೇರಿ, ಕಲ್ಯಾಣಿ...ರಾಗಗಳ ಸಾಕ್ಷಾತ್ಕಾರ.
ಈ ಕಾದಂಬರಿ ಸಂಗೀತದ ಭಾವ, ರಸ, ಭಕ್ತಿಯನ್ನು ಪರಿಚಯಿಸಿದೆ. ಆದರೆ ನನ್ನ ಮಿತಿಯೊಳಗೆ ಕಾದಂಬರಿಗೆ ಬೇಕಾಗುವಷ್ಟು ಸಂಗೀತವನ್ನು ಮಾತ್ರ ಬಳಸಿಕೊಂಡಿದ್ದೇನೆ.