ಮನುಸ್ಮೃತಿಯ ಒಂಬತ್ತನೆ ಅಧ್ಯಾಯ ಹೇಳುತ್ತದೆ ಸ್ತ್ರೀ ಸ್ವತಂತ್ರಳಾಗಿರಲು ಅರ್ಹಳಲ್ಲ, ಬಾಲ್ಯದಲ್ಲಿ ಪಿತ, ಯೌವನದಲ್ಲಿ ಪತಿ, ಮುಪ್ಪಿನಲ್ಲಿ ಪುತ್ರನಿಂದ ರಕ್ಷಿಸಲ್ಪಡಬೇಕು
ಯೋಗ್ಯ ಕಾಲದಲ್ಲಿ ವಿವಾಹ ಮಾಡದ ಪಿತ, ಯೌವನದಲ್ಲಿ ತನ್ನ ಸತಿಯ ದೇಹ-ಮನಸ್ಸುಗಳನ್ನು ಸುಖ-ಸಂತದಿಂದಿಡದ ಪತಿ, ಪತಿಯ ನಂತರ ಅವಳನ್ನು ರಕ್ಷಿಸದ ಸುತರು ನಿಂದನಾರ್ಹರು
ಜೊತೆಗೆ ಸ್ತ್ರೀಯರಿಗೊಂದು ನೀತಿ ಸಂಹಿತೆ ಇದೆ.
ಯಾವ ಸ್ತ್ರೀ, ಕಾಯಾ, ವಾಚಾ, ಮನಸಾ ತನ್ನ ಪತಿಗೆ ದ್ರೋಹ ಮಾಡುವುದಿಲ್ಲವೋ, ಅವಳು ಸಾಧ್ವಿ ಎನಿಸಿಕೊಳ್ಳುತ್ತಾಳೆ. ಉತ್ತಮ ಲೋಕಗಳನ್ನು ಹೊಂದುತ್ತಾಳೆ
ಸ್ತ್ರೀಗೆ ಬೇಕಿರಲಿ ಬೇಡದಿರಲಿ, ಸಮಾಜದ ವ್ಯವಸ್ಥೆಗೆ ಹೆದರಿಯೋ, ಕುಟುಂಬದ ಒತ್ತಡದ ಪರಿಣಾಮದ ಜೊತೆಗೆ ಸದ್ಗತಿ-ದುರ್ಗತಿಗಳ ಭಯಕ್ಕೆ ತನ್ನನ್ನು ಒಡ್ಡಿಕೊಳ್ಳುವುದು ಎಲ್ಲಿಯವರೆಗೆ? ಇಂದಿರಾಗೆ ನಿಮ್ಮ ಸಹಾನೂಭೂತಿ ಇರಲಿ.
ಅಂಥ ಮನಃಸ್ಥಿತಿಯಿಂದ ಸ್ತ್ರೀಬೇಗ ಹೊರಗೆ ಬಂದಾಳು!