ಬದುಕಿನ ಬಗ್ಗೆ ಕಡೆಂಗೋಡ್ಲು ಶಂಕರಭಟ್ಟರು ಅದ್ಭುತವಾದ
ಮಾತುಗಳನ್ನು ಹೇಳಿದ್ದಾರೆ:
'ನದಿಯ ನೀರು ಹರಿದಂತೆ ಜೀವನದ ನದಿ ಹರಿಯುತ್ತದೆ. ಹೀಗೆ
ಹರಿಯುವಾಗ ಏನೇನೋ ಅನುಭವಗಳನ್ನು ಹೊತ್ತು ತರುತ್ತದೆ. ಆಯ್ಕೆ
ಮಾಡುವ ಸ್ವಾತಂತ್ರ್ಯ ಯಾರಿಗೂ ಇಲ್ಲ. ಬದುಕನ್ನು ಇದ್ದಂತೆ
ಸ್ವೀಕರಿಸುವುದು ಸಹಜ ಧರ್ಮ.'
ಹೌದ್ ರಾಜೀವ್, ಸುಮಿತ್ರ ಬದುಕನ್ನು ಬಂದಂತೆ ಸ್ವೀಕರಿಸಿದರು.
ಆಯ್ಕೆಯ ಸ್ವಾತಂತ್ರ್ಯ ಅವರಿಗೆ ಇರಲಿಲ್ಲ.
'ನಿನ್ನೊಳಗೆ ನೀ ಹೊಕ್ಕು ನಿನ್ನನ್ನು ನೀ ಕಂಡು ನೀನೆ ನೀನಾಗು
ಗೆಳೆಯ' ಎಂದರು ಬೇಂದ್ರೆ.
ತನ್ನ ಬದುಕಿನ 'ಶ್ವೇತ ಗುಲಾಬಿ'ಯನ್ನು ಕಳೆದುಕೊಂಡ ರಾಜೀವ್ನನ್ನು
ಮತ್ತೆ ಯಾರೂ ನೋಡಲಿಲ್ಲ.