'ವೇದಾನಾಂ ಸಾಮ ವೇದೋಸ್ಮಿ' ಎಂದು ಪರಮಾತ್ಮನೆ ನುಡಿದಿದ್ದಾನೆ. ಅಂಥ ಸಾಮವೇದ ಸಂಗೀತದ ಮಾತೃಸ್ಥಾನ ಎಂದ ಮೇಲೆ ಸಂಗೀತದ ಮಹತ್ವವನ್ನು ಗುರುತಿಸಬಹುದು. ಸಂಗೀತ ಬಗ್ಗೆ ನನ್ನದು ಅಪಾರವಾದ ಜ್ಞಾನವಲ್ಲ. ನನ್ನ ಕಥಾವಸ್ತುವಿಗೆ ಅಗತ್ಯವಾದಷ್ಟೇ ಬಳಸಿಕೊಂಡಿದ್ದೇನೆ.
ಗತಕ್ಕೆ ಸೇರಿ ಹೋದ ವಾರಿಧಿಯ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಲಿಲ್ಲ. ಹಟಮಾರಿ ಹೆಣ್ಣು ಮತ್ತೆ ಮೇದಿನಿಯಲ್ಲಿ ಹುಟ್ಟಲು ಪಣ ತೊಡುತ್ತಾಳಾ? ಖಂಡಿತ ಗೊತ್ತಿಲ್ಲ. ಅವಳು ದ್ವೇಷಿಸುತ್ತಿದ್ದ ಸಂಗೀತದಿಂದಲೇ ಅವಳಿಗೆ ಮುಕ್ತಿ.
"ಪಾಹಿ ದೇವಿ ಭಾವುಕ ಮನವರತಂ! ಹೇ ಶ್ರೀರಂಜನಿ ಮಂಗಳ ಕಾರಿಣಿ||"