ವಿದ್ಯಾರ್ಥಿಗಳ ದೃಷ್ಟಿಯಲ್ಲಿ ವ್ಯಾಕರಣವೆಂದರೆ ಶಾಸ್ತ್ರೋಕ್ತ, ಗಹನ-ಗಂಭೀರ, 'ಜಗಿಯಲಾಗದ ಕಬ್ಬಿಣದ ಕಡಲೆ' ಎಂಬ ಭಾವನೆಯಿದೆ. ಈ ಮನೋಭಾವ ವಿದ್ಯಾರ್ಥಿಗಳಿಗೆ ಬಾರದಂತೆ ಎಚ್ಚರವಹಿಸುವುದು ಅಗತ್ಯ. ವ್ಯಾಕರಣದ ಬಳಕೆ ಸರಿಯಾಗಿ ಆದಾಗ, ಬರೆಯುವ ವಾಕ್ಯಗಳಿಗೆ ಸಿಗುವ ಮೆರೆಗೇ ಬೇರೆಯದು.
ಪ್ರಸ್ತುತ 'ವಿದ್ಯಾರ್ಥಿಗಳಿಗೆ ಸುಲಭ ಕನ್ನಡ ವ್ಯಾಕರಣ' ಕೃತಿಯನ್ನು ಬರೆದಿರುವ ನಿವೃತ್ತ ಪ್ರಾಚಾರ್ಯ ಎಂ.ವಿ. ನಾಗರಾಜರಾವ್ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ವಿದ್ವಾಂಸರು; ೩೮ ವರ್ಷಗಳ ಕಾಲ ಕನ್ನಡವನ್ನು ಬೋಧಿಸಿದ ಹಿರಿಯರು. ಹೀಗಾಗಿ, ಸರಳ, ಸುಲಭ ಶೈಲಿಯಲ್ಲಿರುವ ಈ ಕೃತಿಯು ವಿದ್ಯಾರ್ಥಿಗಳಿಗೆ ಬಹುಬೇಗ ಗ್ರಾಹ್ಯವಾಗುತ್ತದೆಂಬ ನಂಬಿಕೆ ನಮ್ಮದು.