ಒಬ್ಬ ವ್ಯಕ್ತಿ ಜೀವನದಲ್ಲಿ ಯಶಸ್ಸು ಕಾಣಲು ಅವನ ಸಾಮರ್ಥ್ಯ, ವ್ಯಕ್ತಿತ್ವ, ಪ್ರಾಮಾಣಿಕತೆ ಮತ್ತು ಮುಂದಾಲೋಚನೆ ಅತ್ಯಂತ ಮುಖ್ಯವಾದುದು. (ಈ ಪುಸ್ತಕದಲ್ಲಿ ಕಾರ್ಯಶ್ರದ್ಧೆ, ಕರ್ತವ್ಯನಿಷ್ಠೆ ಮತ್ತು ಜೀವನ ಮೌಲ್ಯಗಳನ್ನು ಪ್ರತಿಪಾದಿಸುವ ನೂರು ಪ್ರಸಂಗಗಳಿವೆ.
ಪರಮಹಂಸ, ವಿವೇಕಾನಂದ, ಗುರುನಾನಾಕದೇವ, ಪೈಗಂಬರ್, ಯೇಸು ಕ್ರಿಸ್ತ, ಗಾಂಧಿ, ಲಿಂಕನ್, ಅಶೋಕ ಮುಂತಾದ ಹಿರಿಯರು, ಸಂತರು, ಮಹಾತ್ಮರು, ವಿದ್ವಾಂಸರು, ರಾಜರು, ರಾಷ್ಟ್ರಪ್ರೇಮಿಗಳು ನಡೆದ ದಾರಿ, ಬದುಕಿದ ರೀತಿ, ಅವರ ಜೀವನಾದರ್ಷ, ಲೋಕಾನುಭವ, ಅಭೂತಪೂರ್ವ ಚಿಂತನೆ ಎಲ್ಲವೂ ಇಂದಿನ ಯುವಪೀಳಿಗೆಗೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು, ಉನ್ನತ ಭಾವನೆಗಳನ್ನು ಮೈಗೂಡಿಸಿಕೊಳ್ಳಲು ಸಹಾಯಕವಾಗಬಲ್ಲದು. ಶುಚಿ ಮಾರ್ಗದಲ್ಲಿ ಬಹುದೂರ ಸಾಗಲು ಕೊಡುಗೆಯಾಗಬಲ್ಲದು.
ನಿವೃತ್ತ ಪ್ರಾಚಾರ್ಯರಾದ ಎಂ.ವಿ. ನಾಗರಾಜರಾಯರು ಈ ವ್ಯಕ್ತಿತ್ವ ವಿಕಸನ ಪುಸ್ತಕದಲ್ಲಿ ಜೀವನ ಮೌಲ್ಯಗಳನ್ನು ತಿಳಿಸಿಕೊಡುವ ಹಲವಾರು ಫಟರೆಗಳನ್ನು ಸರಳವಾಗಿ ನಿರೂಪಿಸಿದ್ದಾರೆ. ಕಿರಿಯರಿಗೆ ಇಲ್ಲಿಯ ಅಪರೂಪದ ಪ್ರಸಂಗಗಳು ಜೀವನದಲ್ಲಿ ಆದರ್ಶಗಳನ್ನು ರೂಢಿಸಿಕೊಳ್ಳಲು, ಬದುಕನ್ನು ಹಸನಾಗಿಸಿಕೊಳ್ಳಲು ಸಹಾಯಕವಾಗುವುದರಲಿ ಎರಡು ಮಾತಿಲ್ಲ.